Chitradurga : 2ನೇ ಮದುವೆಗೆ ಮುಂದಾಗಿದ್ದ ಪತಿಗೆ ಮೊದಲ ಪತ್ನಿಯಿಂದ ಮಂಟಪದಲ್ಲೇ ಬಿತ್ತು ಚಪ್ಪಲಿ ಏಟು

CHITRADURGA: ವರದಕ್ಷಿಣೆಯ ದುರಾಸೆಗೆ ಮೊದಲ ಪತ್ನಿಯನ್ನು ಬಿಟ್ಟು 2ನೇ ಮದುವೆಗೆ ಮುಂದಾಗಿದ್ದ ಪತಿಗೆ, ಮದುವೆಯ ಮಂಟಪದಲ್ಲೇ ಮೊದಲ ಪತ್ನಿಯಿಂದ ಸಿಡಿ ಚಪ್ಪಲಿ ಏಟು ಬಿದ್ದಿರುವ ಘಟನೆ ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ ಎಂಬಾತ, 4 ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ಯುವತಿಯೊಂದಿಗ ಮದುವೆಯಾಗಿದ್ದ. ಆದರೆ ವರದಕ್ಷಿಣೆ ಆಸೆಗಾಗಿ ತನ್ನ ಮೊದಲ ಪತ್ನಿಗೆ ಯಾವುದೇ ಮಾಹಿತಿ ನೀಡದೆ, ಕಾರ್ತಿಕ್ 2ನೇ ಮದುವೆಗೆ ಮುಂದಾಗಿದ್ದ. ಆದರೆ ಈ ವಿಷಯ ತಿಳಿದ ಮೊದಲ ಪತ್ನಿ ಕುಟುಂಬಸ್ಥರೊಂದಿಗೆ ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪಕ್ಕೆ ಬಂದು, ಎಲ್ಲರ ಎದುರೇ ಪತಿಗೆ ಚಪ್ಪಲಿ ಏಟು ನೀಡಿದ್ದಾಳೆ.

ಈ ಘಟನೆಗೆ ಕಂಡು 2ನೇ ವಧು ಮತ್ತು ಅವರ ಕುಟುಂಬದವರು ಗಾಬರಿಗೊಂಡು, ಮದುವೆ ಮಂಟಪದಲ್ಲಿ ಭಾರೀ ಗೊಂದಲವಾಯಿತು. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Author:

...
Sushmitha N

Copy Editor

prajashakthi tv

share
No Reviews