Chikkanayakanahalli : ಮೈತ್ರಿ ಗುಟ್ಟು ರಟ್ಟು ಮಾಡಿದ ಶಾಸಕ ಸುರೇಶ್ ಬಾಬು

CHIKKANAYAKANAHALLI: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಇರುವ ಮೈತ್ರಿಯ ಗುಟ್ಟು ಸಿಐಎಲ್‌ಪಿ (CLP) ನಾಯಕ ಸಿ.ಬಿ. ಸುರೇಶ್ ಬಾಬು ಬಿಚ್ಚಿಟ್ಟಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಒಂದಾಣಿಕೆ ಕೊರತೆ ಇದೆ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ," ಎಂದು ತೀವ್ರ ವಾಗ್ದಾಳಿ ನಡೆಸಿದರು.

"ಯಾವತ್ತೂ ದೇವೇಗೌಡರು ಬಿಜೆಪಿಯೊಂದಿಗೆ ಮುಖ ಮಾಡಿರಲಿಲ್ಲ. ಆದರೆ ಇತ್ತೀಚಿನ ಮೈತ್ರಿಯಿಂದ ಜೆಡಿಎಸ್‌ ವರ್ಚಸ್ಸು ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ," "ಇದಕ್ಕೆ ಈಗಾಗಲೇ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ," ಎಂದರು.

"ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳು ರಚನೆಯಾಗಿಲ್ಲ. ಆದ್ದರಿಂದ ಕಾರ್ಯಾಚರಣೆಯಲ್ಲಿ ತೊಂದರೆಗಳು ಎದುರಾಗುತ್ತಿವೆ. ಜನರಲ್ಲಿ ಗೊಂದಲ ನಿರ್ಮಾಣವಾಗದಂತೆ ನೋಡಿಕೊಳ್ಳಲು ನಾವು ಈ ಕುರಿತಂತೆ ಆಗಲೇ ಬೇಡಿಕೆಗಳನ್ನು ಇಟ್ಟಿದ್ದೇವೆ," ಎಂದು ಹೇಳಿದರು. ಇನ್ನು ಈ ಎಲ್ಲ ವಿಷಯಗಳನ್ನು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಸಮನ್ವಯತೆಯನ್ನು ತರಲು ಮುಂದಿನ ದಿನಗಳಲ್ಲಿ ತೀರ್ಮಾನಗಳು ಕೈಗೊಳ್ಳಲಾಗುತ್ತದೆ. ಈಗಾಗಲೇ ಎರಡು ಪಕ್ಷಗಳು ಒಟ್ಟಾಗಿ ಸಂಘಟನೆ ಮಾಡಿಕೊಳ್ಳಲು ನಿರ್ಧಾರ ತೆಗೆದುಕೊಳ್ಳುತ್ತಿವೆ," ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ವೇಳೆ ರಾಜಕೀಯ ನಿಂತ‌ ನೀರಲ್ಲ, ರಾಜಕಾರಣದಲ್ಲಿ ಸೋಲು ಗೆಲುವು ಎರಡು ಸಹಜ. ಆದರೆ ಜನಾಭಿಪ್ರಾಯವೇ ಅಂತಿಮ, ಆದ್ದರಿಂದ ನಾವೆಲ್ಲಾ ತಲೆಬಾಗುತ್ತೇವೆ. ಜನ ಮೂರು ಭಾರಿ ಕೊಟ್ಟ ತೀರ್ಪಿಗೆ ತಲೆ ಭಾಗಿ ಮನೆಯಲ್ಲಿ‌ ಕೂರುವ ವಂಶ ದೇವೆಗೌಡ್ರದ್ದಲ್ಲ. ಸೋತರು ಕೂಡ ಮರುದಿನ ಜನರ ಜೊತೆ ಬೆರೆಯುವಂತ ಯಾರಾದರೂ ರಾಜಕಾರಣಿ ಇದ್ದರೆ, ದೇವೆಗೌಡ್ರನ್ನ ಮಾತ್ರ ನೀವು ನೋಡಿರಬಹುದು ಎಂದರು.

ಅದೇ ರೀತಿ ನಿಖಿಲ್‌ಕುಮಾರಸ್ವಾಮಿ ಕೂಡ ಮೂರು ಭಾರಿ‌ ಸೋತಿದ್ದೇನೆ ಎಂಬ ಹಿಂಜರಿಕೆ ಇಲ್ಲದೆ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಖಂಡಿತಾ ಇವರು ಎಲ್ಲರನ್ನು ಸಂಘಟಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸದೃಡ ಮಾಡ್ತಾರೆ ಅನ್ನೋ ಭರವಸೆ ಇದೆ ಎಂದು ಹೇಳಿದರು.

Author:

...
Sushmitha N

Copy Editor

prajashakthi tv

share
No Reviews