BANGALORE NEWS : ರಾಜ್ಯದ ಅತಿ ಭದ್ರತಾ ಪರಪ್ಪನ ಅಗ್ರಹಾರ ಜೈಲು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಪರಿವರ್ತನೆಗೊಂಡಿದ್ದು, ಸಿಸಿಬಿ ದಾಳಿ ನಡೆಸಿದ ನಂತರ ಬೃಹತ್ ಪ್ರಮಾಣದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ಜೂನ್ 16ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಸಿಸಿಬಿ ಅಧಿಕಾರಿಗಳ ತಂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಳಿ ನಡೆಸಿತು.. ದಾಳಿ ವೇಳೆ ಕಸೂರಿ ಮೇತಿ ಸೊಪ್ಪು, ಬೀಡಿ ಪ್ಯಾಕೆಟ್ಸ್, ಗಾಂಜಾ ಚಿಲ್ಲಂಸ್, ಮೊಳೆಗಳು, ಹರಿತವಾದ ವಸ್ತುಗಳು, ಗುಟ್ಕಾ ತಂಬಾಕು ಪ್ಯಾಕೆಟ್ಸ್, ಸುಣ್ಣದ ಡಬ್ಬಿ, ಡೈರಿಗಳು, ಚಾಕುಗಳು, ನಗದು ಹಣ, ಮೊಬೈಲ್ ಚಾರ್ಜರ್, ಕತ್ತರಿ, ಕಬ್ಬಿಣದ ರಾಡ್ ಪತ್ತೆಯಾಗಿದೆ.
ಈ ಎಲ್ಲಾ ವಸ್ತುಗಳು ಜೈಲಿನ ಸಜಾಬಂಧಿ ಬ್ಯಾರಕ್ ಮತ್ತು ವಿಐಪಿ ಸೆಲ್ಸ್ಗಳಲ್ಲಿ ಪತ್ತೆಯಾಗಿದ್ದು, ಒಳಗೆ ನಡೆಯುತ್ತಿರುವ ಅಕ್ರಮ ಚಟುವಟಿ ಕೆಗಳ ಮೇಲೆ ಗಂಭೀರವಾಗಿ ಪ್ರಶ್ನೆ ಎದ್ದಿವೆ. ಸಿಸಿಬಿ ಅಧಿಕಾರಿಗಳು ಈಗಾಗಲೇ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿ ಸುತ್ತಿದ್ದಾರೆ. ಈ ವಸ್ತುಗಳು ಜೈಲಿನೊಳಗೆ ಹೇಗೆ ಪ್ರವೇಶಿಸುತ್ತವೆ ಎಂಬುದರ ಬಗ್ಗೆ ಶಂಕೆಗಳು ಹೆಚ್ಚಾಗಿವೆ.