ಬೆಂಗಳೂರು : ಆಟೋ ಟಚ್ ಆಗಿದ್ದಕ್ಕೆ ನಾರಿ ದರ್ಪ | ಡ್ರೈವರ್ ಗೆ ಚಪ್ಪಲಿಯಿಂದ ಹೊಡೆದ ಮಹಿಳೆ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ದರ್ಪ ಮಿತಿ ಮೀರುತ್ತಿದೆ. ಯಾವುದೇ ರಾಜ್ಯದಿಂದ ಜನರು ಬಂದರೂ ನಮ್ಮ ಬೆಂಗಳೂರು ಆಶ್ರಯ ನೀಡುತ್ತೆ, ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳುತ್ತಿರೋ ಅನ್ಯ ಭಾಷಿಗರು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡ್ತಾ ಇರೋದು ಮಾತ್ರ ಮುಂದುವರೆಯುತ್ತಲೇ ಇದೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡು ಎಂದಿದ್ದಕ್ಕೆ ಕ್ಯಾಬ್‌ ಡ್ರೈವರ್‌ನ ಮೇಲೆ ಬೇರೆ ರಾಜ್ಯದ ಯುವಕ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದ. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಅನ್ಯ ರಾಜ್ಯದವರು ಕನ್ನಡಿಗರ ಮೇಲೆ ದರ್ಪ ತೋರಿದ್ದಲ್ಲದೇ ಹಲ್ಲೆ ಮಾಡಿರೋ ಘಟನೆ ಬೆಳಕಿಗೆ ಬಂದಿದೆ.

ಸ್ಕೂಟಿಯೊಂದಕ್ಕೆ ಆಟೋ ಟಚ್‌ ಆಗಿದ್ದಕ್ಕೆ ಕಿರಿಕ್‌ ತೆಗೆದ ಬಿಹಾರಿ ಮೂಲದ ಮಹಿಳೆ, ಆಟೋ ಚಾಲಕನೊಂದಿಗೆ ದರ್ಪ ತೋರಿದ್ದು, ಚಾಲಕನಿಗೆ ಚಪ್ಪಲಿಯಿಂದ ಥಳಿಸಿ, ಅಸಭ್ಯವಾಗಿ ವರ್ತಿಸಿದ್ದಾಳೆ. ಬಿಹಾರಿ ಮೂಲದ ಮಿಶ್ರಾ ಎಂಬಾಕೆ ದರ್ಪ ತೋರಿರೋ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನರು ತೀವ್ರ ಆಕ್ರೋಶ ಹೊರಹಾಕ್ತಿದ್ದಾರೆ. ಇನ್ನು ಬೆಂಗಳೂರಿನ ಬೆಳ್ಳಂದೂರು ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಟ್ರಾಫಿಕ್‌ನಲ್ಲಿ ನಿಂತಿದ್ದ ಸ್ಕೂಟಿಗೆ ಹಿಂಬದಿಯಲ್ಲಿದ್ದ ಆಟೋ ಟಚ್‌ ಆಗಿದೆ. ಇಷ್ಟಕ್ಕೆ ರೊಚ್ಚಿಗೆದ್ದ ಮಹಿಳೆ ಆಟೋ ಚಾಲಕನ ಮೇಲೆ ಗಲಾಟೆ ಮಾಡಿದ್ದಾಳೆ. ಇಬ್ಬರ ಜಗಳ ಆತಿರೇಕಕ್ಕೆ ತಿರುಗಿದ್ದು ಬಿಹಾರಿ ಮೂಲದ ಮಹಿಳೆ ಮಿಶ್ರಾ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.

ಇನ್ನು ಈ ಬಗ್ಗೆ ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಆಕೆ ಬಿಹಾರಿ ಮೂಲದವಳಾಗಿದ್ದು, ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ. ಗರ್ಭಿಣಿಯಾಗಿರೋ ಮಹಿಳೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಆಟೋ ಡಿಕ್ಕಿಯಾಗಿದ್ದು, ಕೋಪಗೊಂಡು ಆಟೋ ಡ್ರೈವರ್‌ಗೆ ಚಪ್ಪಲಿಯಿಂದ ಹೊಡೆದೆ ಎಂದು ಬಾಯ್ಬಿಟ್ಟಿದ್ದಾಳೆ. ಅದೇನೆ ಆಗಲಿ ತಪ್ಪು ಆಗಿದೆ ಎಂದು ಚಪ್ಪಲಿಯಿಂದ ಹೊಡೆದಿದ್ದು ಮಾತ್ರ ಸರಿಯಲ್ಲ, ಸಾಲದಕ್ಕೆ ಕನ್ನಡಿಗರ ಮೇಲೆ ಅನ್ಯಭಾಷಿಕರ ದರ್ಪ ಹೆಚ್ಚಾಗ್ತಿದ್ದು ಈ ಬಗ್ಗೆ ಕ್ರಮ ವಹಿಸಬೇಕಿದೆ.

Author:

...
Sushmitha N

Copy Editor

prajashakthi tv

share
No Reviews