KORATAGERE NEWS : ಮನುಷ್ಯನ ಅತಿಯಾಸೆಯಿಂದಾಗಿ ಇಂದು ಕಾಡು ನಾಶವಾಗುತ್ತಿದೆ. ಕಾಡನಲ್ಲಿ ಸಿಗುತ್ತಿದ್ದ ಆಹಾರ ತಿಂದು ಪ್ರಾಣಿಗಳು ಹೇಗೋ ಜೀವಿಸುತ್ತಿದ್ದವು. ಕಾಡು ನಾಶದಿಂದಾಗಿ ಪ್ರಾಣಿಗಳು ಆಹಾರ ಅರಸುತ್ತ ನಾಡಿನತ್ತ ಬರುತ್ತಿವೆ. ಅದ್ರಲ್ಲೂ ಗಡಿನಾಡಿನಲ್ಲಿ ಕರಡಿಗಳ ಹಾವಳಿ ಕೊಂಚ ಜಾಸ್ತಿಯೇ ಇರುತ್ತೆ. ಇತ್ತ ಕೊರಟಗೆರೆಯ ಸುತ್ತಮುತ್ತ ಬೆಟ್ಟಗುಡ್ಡಗಳಿವೆ. ಇದೇ ಕಾರಣಕ್ಕೆ ಆಹಾರ ಅರಸುತ್ತ ಕರಡಿಗಳು ಸಿಟಿಗೆ ಎಂಟ್ರಿ ಕೊಡ್ತಿವೆ.
ಕೊರಟಗೆರೆ ಪಟ್ಟಣದ ಶಿವಗಂಗಾ ಟಾಕೀಸ್ ಸಮೀಪದ ಮುಖ್ಯರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ನಡುರಾತ್ರಿಲಿ ರಸ್ತೆಯಲ್ಲಿ ರಾಜಾ ರೋಷವಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಾಲೂಕಿನ ಜನರು ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಕರಡಿ ಕಂಡ ಜನ ಹೊರಬರಲಾಗದೆ ಕಂಗಾಲಾಗಿದ್ದಾರೆ. ಕರಡಿಗಳು ಪಟ್ಟಣಕ್ಕೆ ಬರದಂತೆ ಕ್ರಮಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.