ಬೆಂಗಳೂರು : ಭಾರತೀಯ ನಾಟಕ ರಂಗದ ದಿಗ್ಗಜ ಗಿರೀಶ್‌ ಕಾರ್ನಾಡ್‌ ಅವರ ಜನ್ಮದಿನ

ಗಿರೀಶ್‌ ಕಾರ್ನಾಡ್‌
ಗಿರೀಶ್‌ ಕಾರ್ನಾಡ್‌
ಬೆಂಗಳೂರು ನಗರ

ಬೆಂಗಳೂರು : ಇಂದು ಪ್ರಖ್ಯಾತ ನಾಟಕಕಾರ, ಚಿಂತಕ, ಚಿತ್ರ ನಿರ್ದೇಶಕ ಹಾಗೂ ನಟ ಪದ್ಮ ಭೂಷಣ ಗಿರೀಶ್‌ ಕಾರ್ನಾಡ್‌ ಅವರ ಜನ್ಮದಿನ. 1938ರ ಮೇ 19 ರಂದು ಮಹಾರಾಷ್ಟ್ರದ ಮಾಥೆರಾನ್ ನಲ್ಲಿ ಜನಿಸಿದ ಕಾರ್ನಾಡ್‌ ಅವರು ಕನ್ನಡ ನಾಟಕ ಹಾಗೂ ಭಾರತೀಯ ನಾಟಕ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.

ಗಿರೀಶ್‌ ಕಾರ್ನಾಡ್‌ ತಮ್ಮ ರಚನೆಗಳ ಮೂಲಕ ಭಾರತೀಯ ಪೌರಾಣಿಕ ಕಥೆಗಳಿಗೆ ನವೀನ ಅರ್ಥ ನೀಡಿದವರು. ಇವರ ಯಯಾತಿ, ತುಗಲಕ್, ಹಯವದನ, ನಾಗಮಂಡಲ, ಅಗ್ನಿ ಮಟ್ಟು ಮಳೆ ಎಂಬ ನಾಟಕಗಳು ಬಹಳಷ್ಟು  ಹೆಸರು ಮಾಡಿವೆ. ಇವರು ಕೇವಲ ನಾಟಕಕಾರರಷ್ಟೇ ಅಲ್ಲದೆ, ಚಲನಚಿತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಗಿರೀಶ್‌ ಕಾರ್ನಾಡ್‌ ಅವರು ಜೂನ್‌ 10 2019 ರಂದು ನಿಧನ ಹೊಂದಿದ್ದು, ಗಿರೀಶ್‌ ಕಾರ್ನಾಡ್‌ ಅವರ ಕೃತಿಗಳು ಇಂದಿಗೂ ನಾಟಕಮಂದಿರಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಸಾಹಿತ್ಯ ಚರ್ಚೆಗಳಲ್ಲಿ ಜೀವಂತವಾಗಿ ಉಳಿದಿದೆ. ಜನ್ಮದಿನದ ಈ ಸಂದರ್ಭದಲ್ಲಿ ರಾಜಕೀಯ ಗಣ್ಯರು, ಸಾಹಿತ್ಯ ಪ್ರೇಮಿಗಳು, ನಾಟಕಗಾರರು ಹಾಗೂ ಶಿಷ್ಯರು ಗಿರೀಶ್‌ ಕಾರ್ನಾಡ್‌ ಅವರ ಕೃತಿಗಳನ್ನು ಸ್ಮರಿಸುತ್ತಾ ಗೌರವ ಸಲ್ಲಿಸುತ್ತಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews