BANGALORE : ಇತ್ತೀಚಿನ ದಿನಗಳಲ್ಲಿ ಪತ್ನಿಯರ ನಡವಳಿಕೆಗೆ ಬೇಸತ್ತು ಗಂಡಂದಿರು ಸಾವಿನ ದಾರಿ ಹಿಡಿಯುತ್ತಿರೋದು ಆಘಾತಕಾರಿಯಾಗಿದೆ. ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಹೆಂಡ್ತಿ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಳಿಕ, ರಾಜ್ಯದಲ್ಲಿ ಅನೇಕ ಮಂದಿ ಗಂಡಂದಿರು ಹೆಂಡತಿಯರ ಕಾಟಕ್ಕೆ ಬೇಸತ್ತು ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಹೆಂಡ್ತಿಯ ನಡವಳಿಕೆಗೆ ಬೇಸತ್ತು ನಿನ್ನೆ ಗಂಡನೋರ್ವ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಹೇಳದೇ, ಕೇಳದೇ ಪತ್ನಿ ಪದೇ ಪದೇ ಮನೆ ಬಿಟ್ಟು ಹೋಗ್ತಾ ಇದ್ದು, ಇದರಿಂದ ಮನನೊಂದ ಗಂಡನೋರ್ವ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಂಗಳೂರಿನ ಅಗ್ರಹಾರದಲ್ಲಿ ನಡೆದಿದೆ. ಗೋವರ್ಧನ್ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಗಂಡನಾಗಿದ್ದಾನೆ. ಗೋವರ್ಧನ್ ಹಾಗೂ ಪ್ರಿಯಾ ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಅನ್ಯೋನ್ಯವಾಗಿ ಸಂಸಾರ ಮಾಡ್ತಾ ಬೆಂಗಳೂರಿನ ಕೆ.ಪಿ ಅಗ್ರಹಾರದ 12ನೇ ಮುಖ್ಯ ರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಕೆಳಗಡೆ ಮನೆಯಲ್ಲಿ ಗೋವರ್ಧನ್ ತಾಯಿ ವಾಸವಾಗಿದ್ದರೆ, ಮೂರನೇ ಅಂತಸ್ಥಿನ ಮನೆಯಲ್ಲಿ ಗೋವರ್ಧನ್ ದಂಪತಿ ವಾಸವಾಗಿದ್ದರು.
ಕೆಲ ತಿಂಗಳಿನಿಂದ ಹೆಂಡ್ತಿ ಪ್ರಿಯ ಹೇಳದೇ ಕೇಳದೇ ಆಗಾಗ ಮನೆ ಬಿಟ್ಟು ಹೋಗ್ತಾ ಇದ್ಳು ಎಂದು ಆರೋಪ ಮಾಡಲಾಗಿದೆ, ಕಳೆದ ಒಂದು ತಿಂಗಳ ಹಿಂದೆ ಹೆಂಡ್ತಿ ಪ್ರಿಯ ಯಾರಿಗೂ ಹೇಳದೇ ಮನೆಬಿಟ್ಟು ಹೋಗಿದ್ದಾಳೆ. ಪತ್ನಿ ಮನೆಬಿಟ್ಟು ಹೋದ ಮೇಲೆ ಗೋವರ್ಧನ್ ಒಬ್ಬರೇ ಮನೆಯಲ್ಲಿ ವಾಸವಾಗಿದ್ರಂತೆ. ಮೊನ್ನೆ ರಾತ್ರಿ ಗೋವರ್ಧನ್ ತಾಯಿ ಊಟ ಕೊಟ್ಟು ಬಂದಿದ್ರಂತೆ. ಆದರೆ ಅಮ್ಮ ಕೊಟ್ಟ ಊಟವನ್ನು ಮಾಡದೇ ಮನನೊಂದ ಗೋವರ್ಧನ್ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರುದಿನ ಸಂಜೆಯಾದರೂ ಮಗ ಕೆಳಗೆ ಬರದೇ ಇರೋದನ್ನು ಕಂಡ ತಾಯಿ ಹೋಗಿ ನೋಡಿದಾಗ ಗೋವರ್ಧನ್ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣ ಬೆಳಕಿಗೆ ಬಂದಿದೆ. ಹೆಂಡ್ತಿಯ ನಡವಳಿಕೆಯಿಂದಾಗಿ ಸುಂದರ ಸಂಸಾರ ನಾಶವಾಗಿದೆ. ಗೋವರ್ಧನ್ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.