TUMKURU : ತುಮಕೂರಲ್ಲಿ ಬಕ್ರೀದ್ ಸಂಭ್ರಮ | ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

TUMKUR NEWS : ಇಂದು ಪ್ರಪಂಚ ಹಾಗೂ ದೇಶದೆಲ್ಲೆಡೆ ಮುಸ್ಲಿಂ ಭಾಂದವರಿಂದ ಬಕ್ರೀದ್‌ [BAKRID] ಆಚರಣೆ ಅತ್ಯಂತ ಸಂಭ್ರಮದಿಂದ ನಡೆಯುತ್ತದೆ. ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್‌ ಹಬ್ಬವು ರಂಜಾನ್‌ನಷ್ಟೆ ಪವಿತ್ರವಾಗಿದೆ. ಪುಣ್ಯ ಸಂಪಾದಿರುವ ರಂಜಾನ್ ತಿಂಗಳ ಉಪವಾಸದ ಬಳಿಕ ‘ಈದ್ ಉಲ್ ಫಿತ್ರ್’ [Eid ul Fitr] ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್ ಕ್ಯಾಲೆಂಡರಿನ ‘ದುಲ್ ಹಜ್’ [Dhul-Hajj] ತಿಂಗಳ 10ರಂದು ಬಕ್ರೀದ್ ಆಚರಣೆ ನಡೆಯುತ್ತದೆ. 4 ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ [Prophet Ibrahim] ಅವರ ತ್ಯಾಗವನ್ನು ನೆನಪಿಸುವುದು ‘ಬಕ್ರೀದ್’ನ ಮುಖ್ಯ ಆಶಯವಾಗಿದೆ.

ಇಂದು ತುಮಕೂರಿನ ಈದ್ಗಾ ಮೈದಾನದಲ್ಲಿ [Idga Maidan] ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೆ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್‌ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಅಹಮದ್‌ [Iqbal Ahmed] ಮಾತನಾಡಿ, ಬಕ್ರಿದ್‌ ಅಂದರೆ ತ್ಯಾಗ ಬಲಿದಾನದ ಸಂಕೇತವಾಗಿದೆ. ಬಕ್ರೀದ್‌ ಆಚರಣೆಯ ಮುಖ್ಯು ಉದ್ದೇಶ ಸಹೋದರತ್ವ, ಸಹಬಾಳ್ವೆಯಿಂದ ಎಲ್ಲರೂ ಬಾಳುವುದು. ಯಾವುದೇ ದ್ವೇಷ ಅಸೂಯೆ ಇಲ್ಲೆ ನಾವೆಲ್ಲರೂ ಒಂದು ಎಂದು ಬದುಕುವುದಾಗಿದೆ ಎಂದರು.

ಇನ್ನು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ಅಲ್ಲಾಹುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಸಾರುವುದೇ ಈ ಹಬ್ಬದ ಉದ್ದೇಶವಾಗಿದೆ. ನಮಾಜ್‌ಗೂ ಮುನ್ನ ಕೆಲ ಹೊತ್ತು ‘ತಕ್ಷೀರ್’ ಮೊಳಗಿಸ ಲಾಗುತ್ತದೆ. ಸಮಸ್ತ ಮುಸ್ಲೀಂ ಬಾಂಧವರಿಗೆ ಪ್ರಜಾಶಕ್ತಿ ಟವಿ ವತಿಯಿಂದ ಬಕ್ರೀದ್‌ ಹಬ್ಬದ ಶುಭಾಶಯಗಳು.

Author:

...
Keerthana J

Copy Editor

prajashakthi tv

share
No Reviews