Rachita Ram : ಅಡ್ವಾನ್ಸ್ ಹಣ ವಾಪಸ್ ನೀಡಿಲ್ಲ ಅಂತ ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು

RACHITA RAM : ಜನಪ್ರಿಯ ನಟಿ ರಚಿತಾ ರಾಮ್ ವಿರುದ್ಧ ಕರ್ನಾಟಕ ಫಿಲ್ಮ್‌ ಚೇಂಬರ್‌ ಗೆ ಮತ್ತೊಂದು ದೂರನ್ನು ದಾಖಲಿಸಲಾಗಿದೆ. ಈ ಬಾರಿ "ಉಪ್ಪಿ ರುಪ್ಪಿ" ಸಿನಿಮಾ ನಿರ್ಮಾಪಕರಾಗಿರುವ ವಿಜಯಲಕ್ಷ್ಮಿ ಅರಸ್, ಅವರು ರಚಿತಾ ರಾಮ್‌ಗೆ ಅಡ್ವಾನ್ಸ್ ಹಣ ನೀಡಿದರೂ, ವಾಪಸ್‌ ನೀಡಿಲ್ಲ ಎಂದು ದೂರಿದ್ದಾರೆ.

ರಚಿತಾ ರಾಮ್‌ ವಿರುದ್ಧ ಇತ್ತೀಚೆಗೆ ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾ ತಂಡದವರು ನಟಿಯ ವಿರುದ್ಧ ಆರೋಪ ಮಾಡಿದ್ದರು. ರಚಿತಾ ರಾಮ್ ಅವರು ಸಿನಿಮಾದ ಪ್ರಚಾರಕ್ಕೆ ಬಾರದೇ ಅಸಹಕಾರ ತೋರುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿತ್ತು. ಆದರೆ ಇದೀಗ ‘ಉಪ್ಪಿ ರುಪ್ಪಿ’ (Uppi Ruppi) ಸಿನಿಮಾದ ನಿರ್ಮಾಪಕರು ಕೂಡ ರಚಿತಾ ರಾಮ್ ವಿರುದ್ಧ ದೂರು ನೀಡಿದ್ದಾರೆ. ಚಿತ್ರೀಕರಣಕ್ಕೆ ಬಾರದೇ, ಅಡ್ವಾನ್ಸ್ ಹಣವನ್ನೂ ವಾಪಸ್ ನೀಡದೇ ಸತಾಯಿಸಿದ ಆರೋಪ ರಚಿತಾ ರಾಮ್ ಮೇಲಿದೆ

ಎಂಟು ವರ್ಷಗಳ ಹಿಂದೆ, ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದಲ್ಲಿ ‘ಉಪ್ಪಿ ರುಪ್ಪಿ’ ಚಿತ್ರವನ್ನು ನಿರ್ಮಿಸಲು ಯೋಜಿಸಲಾಗಿತ್ತು. ನಿರ್ದೇಶನದ ಹೊಣೆ ಕೆ. ಮಾದೇಶ್ ವಹಿಸಬೇಕಾಗಿತ್ತು. ಆದರೆ ವಿವಿಧ ಕಾರಣಗಳಿಂದ ಸಿನಿಮಾ ಮುಂದುವರೆಯದೇ ನಿಲ್ಲಿತು. ಈ ಸಮಯದಲ್ಲಿ ರಚಿತಾ ರಾಮ್‌ಗೆ ನೀಡಲಾಗಿದ್ದ ಅಡ್ವಾನ್ಸ್ ಹಣವನ್ನು ಈಗ ವಾಪಸ್ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ದೂರಿನೊಂದಿಗೆ ಫಿಲ್ಮ್‌ ಚೇಂಬರ್‌ಗೆ ಅರ್ಜಿ ಸಲ್ಲಿಸಲಾಗಿದೆ.

 

Author:

...
Sushmitha N

Copy Editor

prajashakthi tv

share
No Reviews