SIRA : ಬಡ್ಡಿದಾರರ ಕಿರುಕುಳಕ್ಕೆ ವ್ಯಕ್ತಿ ಬಲಿ

SIRA NEWS : ತುಮಕೂರು ಜಿಲ್ಲೆಯಲ್ಲಿ ಸಾಲಗಾರರ ಕಾಟ ಮಿತಿ ಮೀರುತ್ತಲೇ ಇದ್ದು, ಮತ್ತೊಂದು ವ್ಯಕ್ತಿ ಬಲಿಯಾಗಿದ್ದಾರೆ.‌ ಮೈಕ್ರೋ ಫೈನಾನ್ಸ್‌ಗಳ ಕಾಟ ಒಂದ್ಕಡೆ ಆದ್ರೆ, ಇನ್ನೊಂದ್ಕಡೆ ಕೈ ಸಾಲಗಾರರ ಕಾಟ ಮಿತಿ ಮೀರುತ್ತಿದೆ. ಈಗಾಲೇ ರಾಜ್ಯದಲ್ಲಿ ಅದೆಷ್ಟೋ ಮಂದಿ ಅಮಾಯಕರು ಸಾಲಗಾರರ ಕಾಟ ತಾಳಲಾರದೇ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ, ಸರ್ಕಾರ ಮೈಕ್ರೋ ಫೈನಾನ್ಸ್‌ಗಳಿಗೆ ಸುಗ್ರೀವಾಜ್ಞೆ ಜಾರಿ ಮಾಡಿದ್ರು ಕೂಡ, ಕಿರುಕುಳ ಕೊಡೊದನ್ನ ಮುಂದುವರೆಸುತ್ತಿದ್ದಾರೆ, ಇದ್ರಿಂದ ಜನರು ಆತ್ಮಹತ್ಯೆ ದಾರಿಯನ್ನು ಹಿಡಿಯುತ್ತಿದ್ದಾರೆ. ಇದೀಗ ಶಿರಾದಲ್ಲಿ ಸಾಲಗಾರರ ಕಾಟ ಹೆಚ್ಚಾಗಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶಿರಾ ನಗರದ ರಂಗನಾಥನಗರದ ಗಡ್ಡದ ರಂಗಯ್ಯ ಎಂಬಾತ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಾಪಾರ, ಮಕ್ಕಳ ವಿದ್ಯಾಬ್ಯಾಸಕ್ಕೆಂದು ರಂಗಯ್ಯ ಕುಟುಂಬ ಸುಮಾರು ಏಳೆಂಟು ಲಕ್ಷ ಸಾಲ ಮಾಡಿಕೊಂಡಿದ್ರು. ನಿತ್ಯ ಮನೆ ಬಳಿ ಬಂದು ಸಾಲದ ಕಂತು ಕಟ್ಟುವಂತೆ ಪೀಡಿಸುತ್ತಿದ್ದರಂತೆ. ಸಾಲದ ಹಣ ಕಟ್ಟಲು ಹಣ ಇಲ್ಲ ಅವಮಾನ ಸಹಿಸಿಕೊಳ್ಳಲು ಆಗಲ್ಲ ಅಂತಾ ರಂಗಯ್ಯ ಅವರ ಪತ್ನಿ ಹೇಳಿದ್ರಂತೆ… ಇದನ್ನ ಕೇಳಿದ ರಂಗಯ್ಯ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಮನೆಯಜನಮಾನ ದಿಢೀರ್‌ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಹಾದಿ ಹಿಡಿದಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ.ಈ ಸಂಬಂಧ ಶಿರಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. 

Author:

...
Keerthana J

Copy Editor

prajashakthi tv

share
No Reviews