VIJAYPURA : ವಿಜಯಪುರ ಕೆನರಾ ಬ್ಯಾಂಕ್‌ನಲ್ಲಿದ್ದ 58 ಕೆಜಿ ಚಿನ್ನ ಕಳ್ಳತನ

VIJAPURA NEWS : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ [BASAVANA BAGEWADI] ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಸಿನಿಮೀಯ ಶೈಲಿಯಲ್ಲಿ ನಡೆದ ಕೋಟಿ ಕೋಟಿ ಮೌಲ್ಯದ ಬ್ಯಾಂಕ್ ಕಳ್ಳತನ [ BANK THEFT] ಪ್ರಕರಣ ಈಗ ರಾಜ್ಯದ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮೇ 25 ರಂದು ನಡೆದಿದ್ದ ಈ ಕೃತ್ಯದಲ್ಲಿ, ಕಳ್ಳರು ಬ್ಯಾಂಕಿನ ಆವರಣದಲ್ಲಿದ್ದ ಸಿಸಿಟಿವಿಗಳನ್ನು ತಿರುಗಿಸಿ, ಎನ್ವಿಆರ್ ಹಾರ್ಡ್ ಡಿಸ್ಕ್‌ ಸಹಿತ ಪರಾರಿಯಾಗಿದ್ದಾರೆ. ಅವರು ನಕಲಿ ಕೀ ಬಳಸಿ LOCKER ಓಪನ್ ಮಾಡಿ, ಬ್ಯಾಂಕಿನ ಅಡವಿಟ್ಟ ಚಿನ್ನಾಭರಣ ಹಾಗೂ ನಗದು ಸಂಪೂರ್ಣವಾಗಿ ಎತ್ತಿ ಪರಾರಿಯಾದಿದ್ದಾರೆ.

ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ನೀಡಿರುವ ಮಾಹಿತಿ ಪ್ರಕಾರ, ಕಳ್ಳರು 58 ಕೆಜಿ 975 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ನಗದು ಕದ್ದಿದ್ದಾರೆ. ಈ ಚಿನ್ನದ ಮೌಲ್ಯವನ್ನು ಸಾಧಾರಣವಾಗಿ 53 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ 8 ವಿಶೇಷ ತನಿಖಾ ತಂಡಗಳನ್ನು ರಚಿಸಿ, ನಿರಂತರವಾಗಿ ಶೋಧ ಕಾರ್ಯ ನಡೆಯುತ್ತಿದೆ.

ಕಳ್ಳರು ಮೊದಲು ಬ್ಯಾಂಕ್ ಪ್ರವೇಶ ದ್ವಾರದ ಕೀ ಮುರಿದು ಒಳನುಗ್ಗಿದ್ದಾರೆ. ನಂತರ ಕಿಟಕಿಯ ಸರಳುಗಳನ್ನು ಒಳಗಿನಿಂದ ಕಟ್ ಮಾಡಿ ಹಿಂದುಳಿದಿಲ್ಲದ ಯೋಜನೆಯಂತೆ ಕೆಲಸ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ದಿಕ್ಕು ತಿರುಗಿಸಿ, CCTV ಎನ್ವಿಆರ್ ಹಾರ್ಡ್ ಡಿಸ್ಕ್‌ ಸಹಿತ ಕಳವು ಮಾಡಿದ್ದಾರೆ. ತಮ್ಮ ಪಠ್ಯವನ್ನು ಸಾಯಿಸಿಕೊಳ್ಳಲು ಬ್ಯಾಂಕ್ ಒಳಗೆ ಕಪ್ಪು ಬಟ್ಟೆ ಬೊಂಬೆ ಇಟ್ಟು ವಾಮಾಚಾರ ಮಾಡಿದ ನಾಟಕವನ್ನೂ ಪ್ರದರ್ಶಿಸಿದ್ದಾರೆ.

ಇನ್ನು SP ಲಕ್ಷ್ಮಣ ನಿಂಬರಗಿ ಅವರು ಮಾಹಿತಿ ನೀಡುತ್ತಾ, “ಈ ಕೃತ್ಯದಲ್ಲಿ 6 ರಿಂದ 8 ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ. ಸಂಘಟಿತ ಗ್ಯಾಂಗ್ ಈ ಕೃತ್ಯವನ್ನು EXPERT PLANING ನೊಂದಿಗೆ ಎಸಗಿದಿದ್ದಾರೆ. ಅವರ ಪತ್ತೆಗೆ ನಾವು ಎಲ್ಲ ದಿಕ್ಕುಗಳನ್ನೂ ಪರಿಶೀಲಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

BANK LOCKER ಳಲ್ಲಿ ಅಡವಿಟ್ಟ ಚಿನ್ನಾಭರಣ ಕಳ್ಳತನವಾದ ಸುದ್ದಿ ಕೇಳಿದ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಆಸ್ತಿ ಉಳಿದಿದೆಯೇ ಎಂಬ ಅನುಮಾನಗಳು ಗ್ರಾಹಕರಲ್ಲಿ ಹೆಚ್ಚಾಗಿದೆ. ಇನ್ನು ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಗ್ರಾಹಕರಿಗೆ ಭದ್ರತೆ ನೀಡುವ ಭರವಸೆ ನೀಡಲಾಗಿದೆ. ಇನ್ನು ಮನಗೂಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

 

 

Author:

...
Keerthana J

Copy Editor

prajashakthi tv

share
No Reviews