CHITRADURGA : ಬಾಲಕಿಗೆ ತಾಳಿ ಕಟ್ಟಿಸಿಕೊಳ್ಳುವಂತೆ ಬಲವಂತ ಮಾಡಿದ ವಿಡಿಯೋ ವೈರಲ್‌ | ಐವರ ಬಂಧನ

CHITRADURGA NEWS : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಗೆ ಕುಟುಂಬಸ್ಥರೇ ಬಲವಂತವಾಗಿ ತಾಳಿ ಕಟ್ಟಿಸಲು ಮುಂದಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚಳ್ಳಕೆರೆ ತಾಲೂಕು ಕೇಂದ್ರದ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಪಠಣ ಮಾಡುತ್ತಿರುವ ಈ ಬಾಲಕಿ, ತನ್ನ ಕುಟುಂಬಸ್ಥರಿಂದ ಕೃಷ್ಣ ಎಂಬ ಯುವಕನೊಂದಿಗೆ ಮದುವೆಯಾಗುವಂತೆ ಬಲವಂತ ಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. "ನನ್ನನ್ನು ಕಾಪಾಡಿ, ಈ ಮದುವೆ ನನಗೆ ಬೇಕಿಲ್ಲ" ಎಂದು ರಸ್ತೆ ಮೇಲೆ ಬಿದ್ದು ಮನವಿ ಮಾಡಿದ್ದರೂ, ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸುವ ಗುರಿಯಲ್ಲಿರುವ ಪೋಷಕರು ಬಾಲಕಿಯನ್ನು ಹೊಡೆದು ಬಡಿದು ರೋಚಕವಾಗಿ ವರ್ತಿಸಿರುವುದು ವೈರಲ್ ವಿಡಿಯೋದಲ್ಲಿ ಕಾಣಸಿಗುತ್ತಿದೆ.

ಈ ಪ್ರಕರಣ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಗಂಭೀರವಾಗಿ ವಿಚಾರಣೆ ಮಾಡುತ್ತಿದ್ದಾರೆ. ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೇಸ್ವಾಮಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆ ಕರೆದು, ಬಾಲಕಿಗೆ ತಾಳಿ ಕಟ್ಟಿಸಲು ಬಲವಂತ ಮಾಡಿದ ಐವರನ್ನು ಬಂಧಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಭಾರತಿ ಬಣಕಾರ ಹಾಗೂ ಪವಿತ್ರ ಸೇರಿದಂತೆ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳನ್ನು ಸರಕಾರ ತಕ್ಷಣ ವರ್ಗಾವಣೆ ಮಾಡಿದೆ.

 

Author:

...
Keerthana J

Copy Editor

prajashakthi tv

share
No Reviews