ತುಮಕೂರು : 100 ಎಫ್‌ಐಆರ್ ಮಾಡಲಿ, ಜೈಲಿಗೆ ಹಾಕಲಿ ಯಾವ ರೈತನು ಹೆದರಲ್ಲ ಎಂದ ಶಾಸಕ ಸುರೇಶ್‌ ಗೌಡ

ತುಮಕೂರು : ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿರುವುದನ್ನು ಕಿಡಿಕಾರಿದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“100 ಎಫ್‌ಐಆರ್ ಮಾಡಲಿ, ಜೈಲಿಗೆ ಹಾಕಲಿ, ಗೊತ್ತಿದೆ ನಾವು ಎಲ್ಲಿ ನಿಲ್ಲಬೇಕು. ತೊಡೆ ತಟ್ಟಿ ಹೇಳ್ತೀನಿ, ಈ ಸರ್ಕಾರಕ್ಕೆ ಯಾವುದೇ ರೈತನು ಹೆದರಲ್ಲ. ಗೋಲಿಬಾರ್ ಮಾಡ್ತೀರಾ? ಮಾಡಿ ನಾನೇ ಮೊದಲು ನಿಂತುಕೊಳ್ತೀನಿ” ಎಂದ ಶಾಸಕ ಸುರೇಶ್‌ ಗೌಡ. ಪ್ರತಿಭಟನೆಯ ಕೊನೆಗೆ ನಡೆದ ಸಣ್ಣ ಪುಟ್ಟ ಘಟನೆಗಳ ಕುರಿತು ವಿಷಾದ ವ್ಯಕ್ತಪಡಿಸಿದರು. "ನಮ್ಮ ಸ್ವಾಮೀಜಿಗಳು ಹೆದರಲ್ಲ, ರೈತರು ಹೆದರುವ ಸಂದರ್ಭವೇ ಇಲ್ಲ. 100 ಕೇಸ್ ಆಗಲಿ, ನಾನೇ ನಿಂತು ಎದುರಿಸುತ್ತೇನೆ" ಎಂಬ ಮೂಲಕ ಅವರು ರೈತರ ಹಕ್ಕು ಹಾಗೂ ಹೋರಾಟದ ಬಗ್ಗೆ ಸಮರ್ಥನೆ ನೀಡಿದರು.

ಇನ್ನು ಇದೇ ವೇಳೆ ಮುಖ್ಯಮಂತ್ರಿ ಸರ್ವಪಕ್ಷ ಸಭೆ ಕರೆದು ರಾಮನಗರಕ್ಕೆ ನೀರು ಹರಿಸುವ ಯೋಜನೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಬಿ. ಸುರೇಶ್‌ಗೌಡ ಒತ್ತಾಯಿಸಿದರು. ಈ ಕುರಿತು ತಕ್ಷಣವೇ ಕ್ಯಾಬಿನೆಟ್‌ನಲ್ಲಿ ನಿರ್ಣಯವಾಗಬೇಕು ಎಂಬ ಧ್ವನಿಯನ್ನು ಸಹ ಎತ್ತಿದರು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಜನರು ಸರಿಯಾದ ಪಾಠ ಕಲಿಸುತ್ತಾರೆ ಎಂದರು.

Author:

...
Sushmitha N

Copy Editor

prajashakthi tv

share
No Reviews