TUMKURU : ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ನಡೆಸಿದ ಹೋರಾಟದ ನಡುವೆಯೇ, ಗುಬ್ಬಿ ಪೊಲೀಸರು ಇಂದು ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಜಿಲ್ಲಾಧ್ಯಕ್ಷ ಚೇತನ್ ಅವರನ್ನು ಬಂಧಿಸಿದ್ದಾರೆ.
ನಿಷೇಧಾಜ್ಞೆ ಹೊರತಾಗಿಯೂ ಪ್ರತಿಭಟನಾಕಾರರು ಕಾಮಗಾರಿ ಸ್ಥಳಕ್ಕೆ ನುಗ್ಗಿ ಪ್ರತಿಭಟನೆ ಮಾಡಿದ್ದಲ್ಲದೇ, ಈ ವೇಳೆ ಜೆಸಿಬಿ, ಹಿಟಾಚಿ ವಾಹನಗಳ ಗ್ಲಾಸ್ ಹೊಡೆದಿದ್ದು, ಕೆಲ ಪೊಲೀಸರಿಗೂ ಗಾಯಗಳಾದ ಹಿನ್ನೆಲೆ, ಗುಬ್ಬಿ ಪೊಲೀಸ್ ಠಾಣೆಯಲ್ಲಿ 13 ಎಫ್ಐಆರ್ಗಳು ದಾಖಲಾಗಿದ್ದು, ಇದೀಗ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಚೇತನ್ ಕುಮಾರ್ ರನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಎಫ್ಐಆರ್ ಮಾಡಿದ್ದು, ಇಂದು ನೇರ ಅರೆಸ್ಟ್ ಮಾಡಿರೋದರ ಹಿಂದೆ ರಾಜಕೀಯ ದುರುದ್ದೇಶವಿದೆ. ಅಲ್ಲದೇ “ಜೀವಕ್ಕಿಂತ ನೀರು ಮುಖ್ಯ. FIR, ಲಾಠಿ, ಬಂಧನಗಳಿಂದ ಹೋರಾಟ ನಿಲ್ಲಲ್ಲ. ಇದು ತುಮಕೂರಿಗಷ್ಟೇ ಅಲ್ಲ, ಇಡೀ ಜಿಲ್ಲೆಯ ಹಕ್ಕಿನ ಪ್ರಶ್ನೆ” ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.