Tumakuru : ಸರ್ಕಾರ ಕಾಮಗಾರಿಗೆ ಮುಂದಾದ್ರೆ ಪರಿಣಾಮ ನೆಟ್ಟಗಿರೊಲ್ಲ ಎಂದ ಸುರೇಶ್ ಗೌಡ

TUMAKURU : ಸರ್ಕಾರ ಯಾವುದೇ ಕಳ್ಳ ಮಾರ್ಗ ಅನುಸರಿಸಿ ನೀರನ್ನು ಕೊಂಡೊಯ್ಯಲು ಪ್ರಯತ್ನಿಸಿದ್ರೆ, ಮೊದಲು ನನ್ನ ಶವದ ಮೇಲೆ ನೀರನ್ನು ಹರಿಸಬೇಕು ಅಷ್ಟೇ. ಯಾವುದಾದರೂ ಸಂಸ್ಥೆಯ ಮುಖಾಂತರ ತನಿಖೆ ನಡೆಸಿ, ಸಾಧಕ-ಬಾಧಕಗಳನ್ನು ಶಾಸಕರಿಗೆ ಹಾಗೂ ರೈತರಿಗೆ ತಿಳಿಸಬೇಕು. ಸರ್ಕಾರ ಆನೆ ನಡೆದಿದ್ದೇ ದಾರಿ ಎಂಬ ರೀತಿ ಹೋದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತುಮಕೂರಲ್ಲಿ ಸುರೇಶ್‌ ಗೌಡ ಸರ್ಕಾರ ವಿರುದ್ಧ ಕಿಡಿಕಾರಿದರು.

ಇಂದು ಗೂಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗೂಳೂರಿನಿಂದ ಕೈದಾಳದವರೆಗೆ 2 ಕೋಟಿ 40 ಲಕ್ಷದ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಗುಬ್ಬಿಯಲ್ಲಿ ಪ್ರತಿಭಟನೆ ಯಶಸ್ವಿಯಾಗಿದ್ದು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಹಾಗೂ ನನ್ನ ಕ್ಷೇತ್ರದಲ್ಲಿ ಪ್ರತಿಭಟನೆಗೂ ಸಹ ಸಿದ್ಧತೆ ನಡೆಯುತ್ತಿದೆ. ಕುಣಿಗಲ್ ಹಾಗೂ ಮಾಗಡಿಗೆ ನಾಲೆಯ ಮುಖಾಂತರ ನೀರನ್ನು ತೆಗೆದುಕೊಂಡು ಹೋಗಲು ಕಳ್ಳ ಮಾರ್ಗ ಹಿಡಿದರೆ ಪರಿಣಾಮ ನೆಟ್ಟಗಿರೋಲ್ಲ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

Author:

...
Sushmitha N

Copy Editor

prajashakthi tv

share
No Reviews