ಶಿವಮೊಗ್ಗ: ರೌಡಿ ಶೀಟರ್ ಮೇಲೆ ಫೈರಿಂಗ್ | ರೌಡಿ ಶೀಟರ್ ಕಾಲಿಗೆ ಗುಂಡೇಟು

ಶಿವಮೊಗ್ಗ:

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಶಬ್ದ ಕೇಳಿ ಬಂದಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಹೊಸಮನೆ ಪೊಲೀಸ್‌ ಠಾಣೆಯ ಎಸ್‌ ಐ ಕೃಷ್ಣ ಅವರು ರೌಡಿ ಶೀಟರ್‌ ರವಿ ಅಲಿಯಾಸ್‌ ಗುಂಡ ಎಂಬಾತನ ಬಲ ಕಾಲಿಗೆ ಗುಂಡು ಹೊಡೆದಿದ್ದರು, ಇದೀಗ ಭದ್ರಾವತಿಯ ಪೇಪರ್‌ ಟೌನ್‌ ಪೊಲೀಸ್‌ ಇನ್ಸ್‌ ಪೆಕ್ಟರ್‌ ನಾಗಮ್ಮ ಅವರು ಮತ್ತೊಬ್ಬ ರೌಡಿಶೀಟರ್‌ ಮೇಲೆ ಫೈರಿಂಗ್‌ ನಡೆಸಿದ್ದಾರೆ.  

ಭದ್ರಾವತಿಯ ಪೇಪರ್ಟೌನ್ಪೊಲೀಸರು, ಪೊಲೀಸ್ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವೂ ಸೇರಿದಂತೆ 12 ಕೇಸ್ಗಳಲ್ಲಿ ಬೇಕಾಗಿರುವ ರೌಡಿಶೀಟರ್ಶಾಹಿದ್ ಬಂಧನ ಕಾರ್ಯಾಚರಣೆ ನಡೆಸಿದ್ದರು. ವೇಳೆ ಆರೋಪಿ ಶಾಹಿದ್‌ ಪೊಲೀಸ್‌ ಸಿಬ್ಬಂದಿ ನಾಗರಾಜ್ಎಂಬುವವರ ಮೇಲೆ ಹಲ್ಲೆಗೆ ಮುಂದಾಗಿದ್ದ. ಕೂಡಲೇ ಪಿಎಸ್ ಐ ನಾಗಮ್ಮ ಶಾಹಿದ್ಕಾಲಿಗೆ ಗುಂಡು ಹಾರಿಸಿ ಆತನನ್ನು ನೆಲಕ್ಕೆ ಬೀಳಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಪೇಪರ್ಟೌನ್ಪೊಲೀಸ್ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೇಪರ್‌ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಗ್ಗೆ ಸ್ವತಃ ಎಸ್ಪಿ ಮಿಥುನ್ಕುಮಾರ್ಮಾಹಿತಿ ನೀಡಿದ್ದಾರೆ.

Author:

...
Editor

ManyaSoft Admin

share
No Reviews