STATE NEWS : ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ KAMAL HASSAN ಕನ್ನಡಿಗರ ಭಾರೀ ವಿರೋಧದ ಮಧ್ಯೆಯೂ ತಮ್ಮ ಹೊಸ ಚಿತ್ರ THUG LIFE ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಕ್ಷಮೆ ಕೇಳುವ ಬದಲು, ಅವರು ಈಗ ಕರ್ನಾಟಕ HIGH COURT ಮೆಟ್ಟಿಲೇರಿದ್ದಾರೆ.
THUG LIFE ಚಿತ್ರ ಜೂನ್ 5ಕ್ಕೆ ದೇಶಾದ್ಯಂತ ಬಿಡುಗಡೆ ನಿರ್ಧರಿಸಿರುವ ಕಮಲ್ ಹಾಸನ್, ಕನ್ನಡದಲ್ಲಿ ಈ ಸಿನಿಮಾ ಬಿಡುಗಡೆಯ ವಿರುದ್ಧ ನಡೆಯುತ್ತಿರುವ ಆಕ್ರೋಶದ ಹಿನ್ನೆಲೆಯಲ್ಲಿ ವಿಧಾನಮಂಡಳಿಗೆ, ಪೊಲೀಸ್ ಇಲಾಖೆಗೆ ಮತ್ತು ಸಿನಿಮಾ ಮಂಡಳಿಗೆ ಸಲಹೆ ನೀಡಬೇಕೆಂದು ಕೋರಿದ್ದಾರೆ.
KAMAL HASSAN ಅವರ ಮನವಿಯ ಪ್ರಕಾರ, ಕರ್ನಾಟಕದಲ್ಲಿ ಈ ಚಿತ್ರದ ಪ್ರದರ್ಶನಕ್ಕೆ ಯಾವುದೇ ತೊಂದರೆಯಾಗಬಾರದು. ಸರ್ಕಾರ ಮತ್ತು ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಬಗ್ಗೆ ನಿರ್ದೇಶನ ನೀಡಬೇಕೆಂದು ಅವರು ಕೇಳಿದ್ದಾರೆ. ಈ ಅರ್ಜಿಯನ್ನು ಕಮಲ್ ಹಾಸನ್ ಅವರ ಸಂಸ್ಥೆ RAJAKAMAL FILM INTERNATIONAL CEO ಮೂಲಕ ಸಲ್ಲಿಸಲಾಗಿದ್ದು, ಇದೀಗ ಇದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.
ಇತ್ತ, ಕನ್ನಡಿಗರು ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. "ಮಾತೃಭಾಷೆಯ ವಿರುದ್ಧ ಮಾಡಿದ ಅವಹೇಳನಕರ ಹೇಳಿಕೆಗೆ ಪ್ರತಿಕ್ರಿಯೆ ತರುವ ಬದಲು, ಕಮಲ್ ಹಾಸನ್ ಚಿತ್ರವನ್ನೇ ಆಮಸದ ತಂತ್ರವನ್ನು ಅನುಸರಿಸುತ್ತಿದ್ದಾರೆ" ಎಂಬ ಅಭಿಪ್ರಾಯ SOCIAL MEDIA ದಲ್ಲಿ ಹರಿದಾಡುತ್ತಿದೆ.
ಹೀಗಾಗಿ, ಜೂನ್ 5ರ THUG LIFE ಬಿಡುಗಡೆ ದಿನದಂದು ಏನು ನಡೆಯಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ಇಟ್ಟಿದೆ. ಕಾನೂನು ಮತ್ತು ಅಭಿಮಾನಿಗಳ ಭಾವನೆಗಳ ನಡುವೆ ಈ ಚಿತ್ರ ಹೇಗೆ ಬಿಡುಗಡೆ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರವು ಮುಂದಿನ ದಿನಗಳಲ್ಲಿ ಸಿಗಲಿದೆ.