KAMAL HASSAN : ನಟ KAMAL HASSAN ಅವರಿಗೆ ಕರ್ನಾಟಕ HIGH COURT ನಿಂದ ತೀವ್ರ ಟೀಕೆ ಎದುರಾಗಿದ್ದು, ಅವರು ಸಲ್ಲಿಸಿದ್ದ ಭದ್ರತೆ ಕೋರಿ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. THUG LIFE ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ HIGH COURT ತೀವ್ರವಾದ ನಿಲುವು ತಾಳಿದೆ. "ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ" ಎಂಬ ಹೇಳಿಕೆಯ ಬೆನ್ನಲ್ಲೇ, ಕರ್ನಾಟಕದಲ್ಲಿ THUG LIFE ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯಾಯಿತು.
ಹೈಕೋರ್ಟ್ ನ್ಯಾ. ನಾಗಪ್ರಸನ್ನ [NAGAPRASANNA] ಅವರು, "ಅವರು ಕ್ಷಮೆ ಕೇಳಿದರೇನು? ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ," ಎಂದು ಸ್ಪಷ್ಟವಾಗಿ ಹೇಳಿದರು. ನ್ಯಾಯಮೂರ್ತಿಯ ಪ್ರಕಾರ, ಭಾಷೆ, ನೆಲ, ಜಲ ಎಂಬವು ಜನರಿಗೆ ಭಾವನಾತ್ಮಕವಾಗಿವೆ. ಇವುಗಳ ಬಗ್ಗೆ ಅನಾದರದ ಹೇಳಿಕೆ ನೀಡುವುದು ವಿಪರ್ಯಾಸಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದರು. “ನಿಮ್ಮ ಭಾಷಣ ಜನರ ಭಾವನೆಗೆ ಧಕ್ಕೆ ತರುತ್ತದೆ. ನೀವು ಪಬ್ಲಿಕ್ ಫಿಗರ್. ಕ್ಷಮೆ ಕೇಳಿ. ಅಲ್ಲದಿದ್ದರೆ ಸಿನಿಮಾ ಬಿಡುಗಡೆಗೆ ತೊಂದರೆ ಅನಿವಾರ್ಯ.”
ನ್ಯಾಯಾಧೀಶರು ಕಮಲ್ ಹಾಸನ್ ವಕೀಲರಿಗೆ "ಕ್ಷಮೆ ಕೇಳುವ ಬಗ್ಗೆ ಯೋಚಿಸಿ, ನಂತರ ಅರ್ಜಿ ಪರಿಗಣನೆ" ಎಂಬ ಸೂಚನೆ ನೀಡಿ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು. ಈ ಹೇಳಿಕೆಯು ಕನ್ನಡಿಗರ ಭಾವನೆಗೆ ಧಕ್ಕೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಕುಂದುಕೊರತೆ ವ್ಯಕ್ತವಾಗಿದೆ. ಈಗ ಕಮಲ್ ಹಾಸನ್ ಕ್ಷಮೆ ಕೇಳುವರಾ? ಅಥವಾ ಚಿತ್ರ ಬಿಡುಗಡೆಗೆ ಇನ್ನೂ ಅಡೆತಡೆಯಾಗುತ್ತದೆಯಾ ಎಂಬ ಪ್ರಶ್ನೆ ಎದ್ದಿದೆ.