TUMAKURU : ರಾಜ್ಯದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ಮತ್ತೆ ಪ್ರತಿಬಂಧ ಎದುರಾಗಿರುವ ಘಟನೆ ತುಮಕೂರು ತಾಲ್ಲೂಕಿನ ಕೋರಾ ಹೋಬಳಿಯ ಜಕ್ಕೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ಎತ್ತಿನಹೊಳೆ ಯೋಜನೆಗೆ ಜಮೀನು ನೀಡಿದ ರೈತ ಮಂಜುನಾಥ್ ಮತ್ತೆ ಹಣ ನೀಡುವಂತೆ ಒತ್ತಾಯಿಸಿ ಸರ್ವೀಸ್ ರಸ್ತೆ ಮುಚ್ಚಿ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ.
ತುಮಕೂರು ತಾಲೂಕಿನ ಕೋರಾ ಹೋಬಳಿ ಬೆಳಧರ ಗ್ರಾಮ ಪಂಚಾಯಿತಿಯ ಜಕ್ಕೆನಹಳ್ಳಿ ಗ್ರಾಮದಲ್ಲಿ ಹಾದೂ ಹೋಗಿರುವ ಎತ್ತಿನಹೊಳೆ ಕಾಮಗಾರಿಯಲ್ಲಿ ಜಮೀನು ಕೊಟ್ಟಿದ್ದ ರೈತ ಮಂಜುನಾಥ್ ಎತ್ತಿನಹೊಳೆ ಯೋಜನೆಯಿಂದ ಹಣವನ್ನು ಪಡೆದುಕೊಂಢಿದ್ದನು, ಇದೀಗ ಮತ್ತೇ ಎತ್ತಿನಹೊಳೆ ಯೋಜನೆಯಿಂದ ಬಂದ ಹಣ ಕಡಿಮೆಯಾಗಿದೆ ಎಂದು ತನ್ನ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಸರ್ವಿಸ್ ರಸ್ತೆಗೆ ಮಣ್ಣು ಹಾಕಿ ಮುಚ್ಚಿದ್ದಾನೆ.
ಇನ್ನೂ ಈ ಬಗ್ಗೆ ಎತ್ತಿನಹೊಳೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು, ಸರ್ವಿಸ್ ರಸ್ತೆ ಮುಚ್ಚಿದ್ದರಿಂದಾಗಿ ಜಕ್ಕೆನಹಳ್ಳಿ ಬೆಟ್ಟದ ಮುತ್ತುರಾಯಸ್ವಾಮಿ ಹಾಗೂ ಚನ್ನಮುದ್ದನಹಳ್ಳಿ ಗ್ರಾಮಗಳಿಗೆ ಸಾಗಲು ಜನರು ಪರದಾಡುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಹಣ ಪಡೆದರು ಸಹ ಸರ್ವಿಸ್ ರಸ್ತೆಗೆ ಮಣ್ಣು ಹಾಕಿ ರಸ್ತೆ ಸಂಪೂರ್ಣ ಮುಚ್ಚಿ ಹುಚ್ಚಾಟವಾಡುತ್ತಿರುವ ಮಂಜುನಾಥ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.