Chikkaballapura : RCB ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣದ ಕುರಿತು ಸಿಎಂ ಸ್ಪಷ್ಟನೆ

CHIKKABALLAPURA: RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಈ ಕಾರ್ಯಕ್ರಮ ಸರ್ಕಾರ ಆಯೋಜಿಸಿದ್ದದ್ದಲ್ಲ. ಇದು KSCA ಹಾಗೂ RCB ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮ” ಎಂದು ತಿಳಿಸಿದ್ದಾರೆ.

ಗೌರಿಬಿದನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “KSCA ಸದಸ್ಯರು ಅಂದು ಬೆಳಿಗ್ಗೆ 11:28ಕ್ಕೆ ನನ್ನನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ನಾನು ಒಪ್ಪಿಕೊಂಡೆ. ಮುಖ್ಯ ಕಾರ್ಯದರ್ಶಿಗೆ ಕೂಡ ಕರೆ ಮಾಡಿ ತಿಳಿಸಿದ್ದೆ,” ಎಂದರು.

“ರಾಜ್ಯಪಾಲರು ಸ್ವತಃ ಬಂದು ಹಾಜರಾದರು. ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದವರು ಯಾರು ಎಂಬುದು ನನಗೆ ಸ್ಪಷ್ಟವಿಲ್ಲ. ಗೋವಿಂದರಾಜು ಅವರಿಂದ ಕರೆಬಂದಾಗ ಅವರಿಗೆ ನಾನು ಹೋಗುತ್ತಿದ್ದೇನೆ, ನೀವೂ ಬನ್ನಿ ಎಂದಿದ್ದೆ,” ಎಂದಿದ್ದಾರೆ.

“ಈಗಾಗಲೇ ₹25 ಲಕ್ಷ ಪರಿಹಾರ ನೀಡಲಾಗಿದೆ. ಅಗತ್ಯವಿದ್ದರೆ ಪರಿಹಾರ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ,” ಎಂದಿದ್ದು,  KSCA ಹಾಗೂ RCB ಆಯೋಜನೆಯ ಭಾಗವಾಗಿ ವಿಧಾನಸೌದ ಮುಂಭಾಗದಲ್ಲಿ ಕಾರ್ಯಕ್ರಮ ಜರುಗಿತ್ತು ಎಂದು ತಿಳಿಸಿದರು.

Author:

...
Sushmitha N

Copy Editor

prajashakthi tv

share
No Reviews