CHAMARAJANAGARA NEWS : ಚಾಮರಾಜನಗರದಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಜೀವಾ [Jeeva] ಎಂಬ MBA ವಿದ್ಯಾರ್ಥಿನಿ ತನ್ನ ಮದುವೆ ಮುಹೂರ್ತಕ್ಕೂ ಮುನ್ನ ಪರೀಕ್ಷಾ ಕೇಂದ್ರಕ್ಕೆ ಹೋಗಿ EXAM ಬರೆದು ಬಂದು ನಂತರ ಮದುವೆಯಾಗಿದ್ದಾರೆ.
ಚಾಮರಾಜನಗರದ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ [Bhramaramba Mallikarjuna Kalyana Mantapa] ಮದುವೆ ನಡೆಯುತ್ತಿತ್ತು. ಚಾಮರಾಜನಗರ ತಾಲೂಕು ಕಾಗಲವಾಡಿ [Kagalavadi] ಗ್ರಾಮದ ಜೀವಾ ಹಾಗು ಕಾರ್ಯ [Karya] ಗ್ರಾಮದ ಚಿದಂಬರ ವಿವಾಹ ಇಂದು ನಿಗಧಿಯಾಗಿತ್ತು. ಅದರಲ್ಲಿ ವಧು ಜೀವಾ MBA ವಿದ್ಯಾರ್ಥಿನಿ. ಇಂದೇ ಪರೀಕ್ಷೆ ಕೂಡ ಇತ್ತು. ಹೀಗಾಗಿ ಮೊದಲು ಮುಹೂರ್ತಕ್ಕೂ ಮುನ್ನ ಪರೀಕ್ಷೆ ಮುಗಿಸಿ ಬಂದು ನಂತರ ಮದುವೆಯಾಗಿದ್ದಾರೆ.
ಪರೀಕ್ಷೆ ಮತ್ತು ಮದುವೆ ಮುಹೂರ್ತ ಒಂದೇ ದಿನ ಇದ್ದ ಕಾರಣ, ಪರೀಕ್ಷೆ ಬರೆದು ಬಂದ ಬಳಿಕ ವಧು ಹಸೆಮಣೆ ಏರಿದ್ದಾರೆ. ತಾಳಿ ಕಟ್ಟುವ ಮುಹೂರ್ತಕ್ಕು ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದು ಬಂದ ನಂತರ ವರ ವಧುವಿಗೆ ತಾಳಿ ಕಟ್ಟಿದ್ದಾರೆ. ಇಂದು ಬೆಳಗ್ಗೆ 9 ರಿಂದ 11 ರವರೆಗೆ ಪರೀಕ್ಷೆ ಇತ್ತು. ಹೀಗಾಗಿ ವಧು 9 ರಿಂದ 11 ರವರೆಗೆ ಪರೀಕ್ಷೆ ಬರೆದು ನಂತರ ಕಲ್ಯಾಣಮಂಟಪಕ್ಕೆ ಬಂದಿದ್ದು, 11.30ಕ್ಕೆ ವರ ವಧುವಿಗೆ ತಾಳಿ ಕಟ್ಟಿದ್ದಾರೆ. ಇನ್ಪನು ಜೀವಾ ಅವರು ಪರೀಕ್ಷೆ ಬರೆದು ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.