Bangalore : ಬೆಂಗಳೂರು ನೂತನ ಕಮಿಷನರ್‌ ಆಗಿ ಸೀಮಂತ್‌ ಕುಮಾರ್‌ ಸಿಂಗ್‌ ನೇಮಕ

Bangalore : ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದಿದ್ದ ಭೀಕರ ಕಾಲ್ತುಳಿತ ದುರಂತದ ಬೆನ್ನಲ್ಲೇ ಬೆಂಗಳೂರು ಕಮಿಷನರ್‌ ದಯಾನಂದ್‌ ಸೇರಿ ಹಲವು ಅಧಿಕಾರಿಗಳ ತಲೆದಂಡ ಮಾಡಲಾಗಿತ್ತು. ದುರಂತಕ್ಕೆ ವಿಪಕ್ಷಗಳು ಟೀಕಾಪ್ರಹಾರವನ್ನೇ ನಡೆಸಿದ್ರು. ಇತ್ತ 11 ಮಂದಿ ಸಾವನ್ನಪ್ಪಿದ್ರು ಪೊಲೀಸ್‌ ಠಾಣೆಯಲ್ಲಿ ಒಂದೇ ಒಂದು ಎಫ್ಐಆರ್‌ ಕೂಡ ದಾಖಲಾಗಿರಲಿಲ್ಲ. ಆದ್ರೆ ಪತ್ರಿಕೆಯಲ್ಲಿ ವರದಿಯನ್ನು ಆಧರಿಸಿ ಹೈಕೋರ್ಟ್‌ನಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದ್ದು, ನಿನ್ನೆ ವಿಚಾರಣೆ ನಡೆಸಿದ ಹೈಕೋರ್ಟ್‌ ದುರ್ಘಟನೆ ಬಗ್ಗೆ ವರದಿ ಕೇಳಿ ಪೀಠ ಆದೇಶ ನೀಡಿತ್ತು. ಬಳಿಕ ರಾತ್ರಿ ವೇಳೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಬೆಂಗಳೂರು ಕಮಿಷನರ್‌ ಸೇರಿ ಹಲವು ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿರುವುದಾಗಿ ಸಿಎಂ ಸ್ಪಷ್ಟನೆ ನೀಡಿದ್ರು.

ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ದಯಾನಂದ್‌ ಅವರನ್ನು ಅಮಾನತು ಮಾಡಿದ ಕೆಲವೇ ಗಂಟೆಗಳಲ್ಲಿ ಆ ಸ್ಥಾನಕ್ಕೆ ಹೊಸ ಆಯುಕ್ತರಾಗಿ ಸೀಮಂತ್‌ ಕುಮಾರ್‌ ಸಿಂಗ್‌ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ನೀಡಿದೆ. 1996ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರೋ ಸೀಮಂತ್‌ ಕುಮಾರ್‌ ಸಿಂಗ್‌ ಮೂಲತಃ ಬಿಹಾರ ಮೂಲದವರಾಗಿದ್ದಾರೆ. ಇವರು ಈ ಹಿಂದೆ ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಆಯುಕ್ತರಾಗಿ, ಎಸಿಬಿಯಲ್ಲಿ ಎಡಿಜಿಪಿಯಾಗಿ, ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಬೆಂಗಳೂರು ಮಹಾನಗರ ಕಾರ್ಯಪಡೆಯ ಎಡಿಜಿಪಿಯಾಗಿರೋ ಸೀಮಂತ್‌ ಕುಮಾರ್‌ ಸಿಂಗ್‌ ಅವರನ್ನು ಬೆಂಗಳೂರಿನ 39ನೇ ನೂತನ ಕಮಿಷನರ್‌ ಆಗಿ ನೇಮಕ ಮಾಡಲಾಗಿದೆ,

Author:

...
Sushmitha N

Copy Editor

prajashakthi tv

share
No Reviews