bangalor - ಗೆದ್ದು ಬಾ ಆರ್ಸಿಬಿ – ಐಪಿಎಲ್ ಫೈನಲ್ಗೆ ಸಿಎಂ ಸಿದ್ದರಾಮಯ್ಯನವರಿಂದ ಶುಭಾಶಯ

SIDDHARAMAIYAHA
SIDDHARAMAIYAHA
ರಾಜ್ಯ

BANGALOR - 

 ಇಂದು ನಡೆಯಲಿರುವ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯಶಾಲಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

ಲಕ್ಕುಂಡಿಯಲ್ಲಿ ಐತಿಹಾಸಿಕ ಪ್ರಾಚ್ಯಾವಶೇಷಗಳ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ್ದರು. ಈ ವೇಳೆ ಸಿಎಂ,ಸಿದ್ದರಾಮಯ್ಯ ನವರು  ಫೈನಲ್ ಪಂದ್ಯದ ಕುರಿತು ಪ್ರತಿಕ್ರಿಯೆ ನೀಡಿದರು.

ಪಂಜಾಬ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ನಮ್ಮ ವಿರುದ್ಧ ಕೇವಲ 101 ರನ್‌ಗಳಿಗೆ ಔಟ್ ಆಗಿತ್ತು. ಆದರೆ ಮುಂಬೈ ವಿರುದ್ಧ ಅವರು ಉತ್ತಮ ಪ್ರದರ್ಶನ ನೀಡಿದ್ರು. ಮುಂಬೈ ಒಂದು ಬಲಿಷ್ಠ ತಂಡ, ಉತ್ತಮ ಆಟಗಾರರಿದ್ದಾರೆ, ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದರು.

ಆರ್‌ಸಿಬಿ ನಾಲ್ಕನೇ ಬಾರಿ ಫೈನಲಿಗೆ ತಲುಪಿದೆ. ಈ ಬಾರಿ ಅವರು ಗೆಲ್ಲಲಿ ಎಂದು ಹಾರೈಸುತ್ತೇನೆ. ಅವರು ಗೆದ್ದರೆ ಅಭಿನಂದನೆ ತಿಳಿಸುತ್ತೇನೆ. ಪಂಜಾಬ್ ಗೆದ್ದರೂ ಕೂಡ ಅವರಿಗೆ ಅಭಿನಂದನೆ ತಿಳಿಸುತ್ತೇನೆ, ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

 

Author:

...
Keerthana J

Copy Editor

prajashakthi tv

share
No Reviews