BANGALORE : ಕಪ್‌ ನಮ್ದೆ ಅಂತ ಗೆದ್ದ ಮೇಲೆ ಹೇಳೋಣ ಎಂದ ಅನಿಲ್‌ ಕುಂಬ್ಳೆ

ANIL KUMBLE : ಐಪಿಎಲ್ ಫೈನಲ್ ಹತ್ತಿರವಾಗುತ್ತಿರುವಾಗ, ಕ್ರಿಕೆಟ್ ಪ್ರೇಮಿಗಳಿಗೆ ಕಾತುರ ಹೆಚ್ಚಾಗಿದೆ. ಈ ನಡುವೆ ಆರ್ಸಿಬಿಯ ಕುರಿತಂತೆ ಮಾಜಿ ನಾಯಕ ಅನಿಲ್ ಕುಂಬ್ಳೆ ನೀಡಿದ ಹೇಳಿಕೆ ಗಮನ ಸೆಳೆದಿದೆ. ಹೌದು, ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, "ಈಗಲೇ ಕಪ್ ನಮ್ದೇ ಅಂತ ಹೇಳಬೇಡಿ, ಗೆದ್ದ ಮೇಲೆ ಹೇಳೋಣ" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

RCB ಈ ಬಾರಿ ಚೆನ್ನಾಗಿ ಆಡುತ್ತಿದೆ. ಎರಡು ಬೆಸ್ಟ್ ತಂಡಗಳು ಫೈನಲ್ ಪ್ರವೇಶಿಸಿವೆ. ನಾನು ಈ ಎರಡು ತಂಡಗಳನ್ನು ಪ್ರತಿನಿಧಿಸಿದ್ದೇನೆ. ಆದರೆ ಈ ಬಾರಿ RCB ಗೆಲ್ಲಬೇಕೆಂದು ನಾನು ಹಾರೈಸುತ್ತೇನೆ." ವಿರಾಟ್ ಕೊಹ್ಲಿ ಈ ಸೀಸನ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು, 600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಎಂಬುದನ್ನು ಕುಂಬ್ಳೆ ವಿಶೇಷವಾಗಿ ಹೆಸರಿಸಿದ್ದಾರೆ.

"ಕೊಹ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ಸಂತೋಷದ ವಿಷಯವೇನೆಂದರೆ, ಈ ಬಾರಿ ಹೊಸ ಐಪಿಎಲ್ ವಿನ್ನರ್ ನಮಗೆ ದೊರೆಯಬಹುದು RCB ಗೆಲ್ಲಬೇಕು."ಇಂತಾ ಸಮಯದಲ್ಲಿ ಅನಿಲ್ ಕುಂಬ್ಳೆಯ ಮಾತು ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಹುಮ್ಮಸ್ಸು ತಂದಿದ್ದು, ಫೈನಲ್ ಪಂದ್ಯದಲ್ಲಿ ಏನು ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.

 

Author:

...
Keerthana J

Copy Editor

prajashakthi tv

share
No Reviews