SHIVAMOGGA NEWS : RCB ಯ ಗೆಲುವಿನ ಸಂಭ್ರಮ ಇಡೀ ರಾಜ್ಯದ ಅಭಿಮಾನಿಗಳನ್ನು ಉಲ್ಲಾಸದಿಂದ ತುಂಬಿದ್ದರೂ, ಶಿವಮೊಗ್ಗದಲ್ಲಿ ನಡೆದ ಒಂದು ದುರ್ಘಟನೆ ಇಡೀ ನಗರವನ್ನು ಶೋಕದಲ್ಲಿ ಮುಳುಗಿಸಿದೆ.
ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಸರ್ಕಲ್ [USHA NARSING HOME CERCLE] ಸಮೀಪದ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ನೆನ್ನೆ ರಾತ್ರಿ ನಡೆದ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಯುವಕ ವೆಂಕಟೇಶ ನಗರ ನಿವಾಸಿ 21 ವರ್ಷದ ಅಭಿ [ABHI] ಎಂದು ಗುರುತಿಸಲಾಗಿದೆ.
RCB ಜಯದ ಸಂಭ್ರಮದಲ್ಲಿ ಹಲವಾರು ಯುವಕರು ಬೈಕ್ ಜಾಥಾ ನಡೆಸುತ್ತಿದ್ದರು. ಈ ವೇಳೆ ಎರಡು ಬೈಕ್ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ, ಅಭಿಗೆ ತೀವ್ರವಾದ ಗಾಯಗಳಾಗಿದ್ದು, ತಕ್ಷಣವೇ ಪ್ರಾಣ ತ್ಯಜಿಸಿದ್ದಾರೆ.
ಅಪಘಾತದ ನಂತರ ಸಹಭಾಗಿಯಾದ ಯುವಕರು ಸಹಾಯಕ್ಕೆ ಮುಂದಾದರೂ, ಅವರ ಪ್ರಯತ್ನ ಫಲಿಸಲಿಲ್ಲ ಎನ್ನಲಾಗಿದೆ. ಘಟನೆ ಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ.