KALABURAGI : ಭೀಮಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನಾಪತ್ತೆ

KALABURAGI NEWS : ಕಲಬುರಗಿ [Kalaburagi] ಜಿಲ್ಲೆಯ ಜೇವರ್ಗಿ [Jevargi] ತಾಲೂಕಿನ ಸರಡಗಿ [Sardagi] ಸೇತುವೆ ಬಳಿ ಭೀಮಾ ನದಿಯಲ್ಲಿ ಈಜಾಡಲು ಹೋಗಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ದುರ್ಘಟನೆ ನಡೆದಿದೆ.

ನಾಪತ್ತೆಯಾದ ಯುವಕನನ್ನು 20 ವರ್ಷದ ಮಹಾದೇವ್ [Mahadev] ಎಂದು ಗುರುತಿಸಲಾಗಿದೆ. ಮಹಾದೇವ್ ತನ್ನ ಐದು ಮಂದಿ ಸ್ನೇಹಿತರೊಂದಿಗೆ ಕಲಬುರಗಿಯಿಂದ ನದಿಗೆ ಈಜಾಡಲು ತೆರಳಿದ್ದ. ಆದರೆ ಈಜು ಬಾರದ ಮಹಾದೇವ್ ನದಿಯ ಮಧ್ಯಭಾಗದಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.

ಇನ್ನು ಈ ಘಟನೆ ನಡೆದು ಕೆಲವೇ ಕ್ಷಣಗಳಲ್ಲಿ ಸ್ನೇಹಿತರು ಬೆಚ್ಚಿಬಿದ್ದು ಕೂಡಲೇ ಸ್ಥಳೀಯರನ್ನು ಹಾಗೂ ಅಗ್ನಿಶಾಮಕ ದಳವನ್ನು ಸಂಪರ್ಕಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ನದಿಯ ಪ್ರವಾಹ ಮತ್ತು ಗಾತ್ರವು ಶೋಧಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

ಇನ್ಟನು ಈ ಘಟನೆ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಇನ್ನು ನಾಪತ್ತೆಯಾದ ಯುವಕನ ಪತ್ತೆಗೆ ಸ್ಥಳೀಯ ನಾಗರಿಕರು ಸಹಕರಿಸುತ್ತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews