VIJAYANAGARA NEWS : ರಾಜ್ಯದ ಪ್ರಸಿದ್ಧ ಸಾರ್ವಜನಿಕ ಸಾರಿಗೆ ಸಂಸ್ಥೆ KSRTC ಮತ್ತೊಮ್ಮೆ ನಿರ್ವಹಣಾ ದೌರ್ಬಲ್ಯದಿಂದ ಸುದ್ದಿಯಲ್ಲಿದೆ. ಕಲಬುರಗಿಯಿಂದ ಹೊಸಪೇಟೆಯ ಕಡೆಗೆ ಚಲಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆಯ ಬಸ್ (ಬಸ್ ಸಂಖ್ಯೆ KA-35 F-138) ನಿನ್ನೆ ತಡರಾತ್ರಿ ಅಪಾಯದಿಂದ ಪಾರಾದ ಘಟನೆಯೊಂದನ್ನು ಕಂಡುಬಂದಿದೆ.
ಇದಕ್ಕೆ ಉದಾಹರಣೆಯಾಗಿ ಕಲ್ಯಾಣ ಕರ್ನಾಟಕ ಸಾರಿಗೆಯ ಸ್ಪೀಪರ್ ಕೋಚ್ನ ಅಪ್ಪರ್ ಸೀಟ್ ಕುಸಿದು ಬಿದ್ದಿದ್ದು, ಆ ಸಮಯದಲ್ಲಿ ಕೆಳಗಡೆ ಮಲಗಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸೀಟ್ ಸಂಪೂರ್ಣವಾಗಿ ಕುಸಿದುಬಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಅದೃಷ್ಟ ಎಂದೇ ಹೇಳಬೇಕಿದೆ. ಇನ್ನು ಘಟನೆಯ ನಂತರ ತಕ್ಷಣ ಕೆಲಕಾಲ ಬಸ್ಸಿನೊಳಗೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಸ್ಸುಗಳ ನಿರ್ವಹಣೆಯಲ್ಲಿನ ಲೋಪ. KSRTC ದೇಶದ ಅತ್ತುತ್ತಮ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿರ್ವಹಣೆ ಹದಗೆಡುತ್ತಿದೆ. ಈ ಬಸ್ಸುಗಳ ಆಂತರಿಕ ಭಾಗಗಳು ಖರ್ಚುಮಾಡುವಂತೆ ಇಲ್ಲದೆ, ಅಪಾಯಕ್ಕೆ ಆಹ್ವಾನ ನೀಡುವಂತಿವೆ," ಎಂಬುದು ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಪ್ರಯಾಣಿಕರು KSRTC ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದು. ಬಸ್ಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.