ತುಮಕೂರು: ಆಹಾರ ಅರಸಿ ಬಂದು ಮುಳ್ಳು ತಂತಿ ಬೇಲಿಗೆ ಸಿಕ್ಕಿ ಹಾಕಿಕೊಂಡ ಕರಡಿ..!

ಕರಡಿ ತಂತಿ ಬೇಲಿಗೆ ಸಿಲುಕಿರುವುದು.
ಕರಡಿ ತಂತಿ ಬೇಲಿಗೆ ಸಿಲುಕಿರುವುದು.
ತುಮಕೂರು

ತುಮಕೂರು:

ಆಹಾರ ಅರಸಿ ಬಂದು ತೋಟಕ್ಕೆ ಹಾಕಿದ್ದ ಮುಳ್ಳುತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಕರಡಿಯನ್ನು ರಕ್ಷಣೆ ಮಾಡಿರುವ  ಘಟನೆ ತುಮಕೂರು ಗ್ರಾಮಾಂತರದ ಮೈದಾಳ ಗ್ರಾಮದ ತೋಟವೊಂದರಲ್ಲಿ ನಡೆದಿದೆ.

ಮೈದಾಳ ಗ್ರಾಮದ ಹೊರವಲಯದಲ್ಲಿ ರಾತ್ರಿ ಆಹಾರ ಅರಸಿ ತೋಟಕ್ಕೆ ಬಂದಿದ್ದ ಕರಡಿಯೊಂದು ತೋಟಕ್ಕೆ ಆಳವಡಿಸಿದ್ದ ಮುಳ್ಳುತಂತಿಯ ಬೇಲಿಗೆ ಸಿಲುಕಿ ಒದ್ದಾಟ ನಡೆಸುತ್ತಿದ್ದು, ಕರಡಿಯ ಅರಚಾಟವನ್ನು ಕೇಳಿ ಗ್ರಾಮಸ್ಥರು ಬೆಚ್ಚಿದ್ದು, ಕರಡಿಯ ನರಳಾಟವನ್ನು ಕಂಡು ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿದು ತುಮಕೂರು ವಲಯ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕರಡಿ ರಕ್ಷಣೆಗಾಗಿ ಕಾರ್ಯಚರಣೆ ಶುರು ಮಾಡಿ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ

Author:

...
Editor

ManyaSoft Admin

share
No Reviews